1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಕ್ಷೀರ ಭಾಗ್ಯ

  • ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಶ್ಯವಿರುವ ಪೌಷ್ಟಿಕ ಆಹಾರವನ್ನು ಒದಗಿಸುವ ದಿಸೆಯಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗದೊಂದಿಗೆ ರಾಜ್ಯದ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲನ್ನು ಒದಗಿಸುವ ಕ್ಷೀರಭಾಗ್ಯ ಯೋಜನೆಯನ್ನು ದಿನಾಂಕ 1 ಆಗಸ್ಟ್ 2013 ರಂದು ಜಾರಿಗೆ ಬಂದಿದೆ.
  • ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ನೆರವು ನೀಡಲು ಹಾಗೂ ಹಾಲು ಉತ್ಪಾದಕರು ತಯಾರಿಸುವ ಹೆಚ್ಚುವರಿ ಹಾಲಿನ ವಿಲೇವಾರಿಗೆ ಅನುವು ಮಾಡಿಕೊಡಲು ಕ್ಷೀರಭಾಗ್ಯ ಯೋಜನೆ ಸಹಕಾರಿಯಾಗಿದೆ.
  •  ಕ್ಷೀರಭಾಗ್ಯ ಯೋಜನೆಯ ಸಾರಾಂಶ ಹೀಗಿದೆ:
ಕ್ರಮ ಸಂಖ್ಯೆ ಸಾರಾಂಶ ಶಾಲೆಗಳು ಅಂಗನವಾಡಿ
1 ಶಾಲೆಗಳು/ಅಂಗನವಾಡಿಗಳು 55,683 64,000
2 ಶಾಲೆ/ಅಂಗನವಾಡಿ ಮಕ್ಕಳು 64 ಲಕ್ಷ 40 ಲಕ್ಷ
3 ಫಲಾನುಭವಿಗಳು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1ರಿಂದ 10ನೇ ತರಗತಿಯ ಮಕ್ಕಳು  6 ತಿಂಗಳಿಂದ 6 ವರ್ಷದವರೆಗಿನ ಮಕ್ಕಳು
4 ಹಾಲಿನ ಪುಡಿಯ ಅಗತ್ಯತೆ ಒಂದು ಮಗುವಿಗೆ ಬೇಕಾಗುವ ಕೆನೆಭರಿತ ಹಾಲಿನಪುಡಿ 18 ಗ್ರಾಂ ಅಂದರೆ 150 ಮಿ.ಲಿ. ಹಾಲಿಗೆ ಸಮ (ವಾರದಲ್ಲಿ ಐದು ದಿನ) ಒಂದು ಮಗುವಿಗೆ ಬೇಕಾಗುವ ಕೆನೆಭರಿತ ಹಾಲಿನಪುಡಿ 18 ಗ್ರಾಂ ಅಂದರೆ 150 ಮಿ.ಲಿ. ಹಾಲಿಗೆ ಸಮ (ವಾರದಲ್ಲಿ ಐದು ದಿನ)
5 ದಿನನಿತ್ಯ ಅಗತ್ಯವಿರುವ ಹಾಲಿನ ಪ್ರಮಾಣ 5 ಲಕ್ಷ ಲೀಟರ್ 3 ಲಕ್ಷ ಲೀಟರ್
6 ಒಂದು ಬಾರಿ ಒಂದು ಮಗುವಿಗೆ ತಗಲುವ ವೆಚ್ಚ ಅಂದಾಜು ರೂ.5.25. ಅಂದಾಜು ರೂ.5.25

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105