ಕರ್ನಾಟಕ ಹಾಲು ಮಹಾಮಂಡಳಿಯು ಕರ್ನಾಟಕ ರಾಜ್ಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ರಾಜ್ಯಮಟ್ಟದ ಅಗ್ರಸಂಸ್ಥೆಯಾಗಿ ಈ ಕೆಳಕಾಣುವ ಧ್ಯೇಯೋದ್ದೇಶಗಳನ್ನು ಸಾಧಿಸಲು ಹೈನುಗಾರಿಕೆ ಅಭಿವೃದ್ಧಿ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಸಹಕಾರಿ ಶೃಂಗಸಂಸ್ಥೆಯಾಗಿದೆ.
ಮಧ್ಯವರ್ತಿಗಳ ನಿರ್ಮೂಲನೆಯೊಂದಿಗೆ, ವೃತ್ತಿಪರರನ್ನು ನೇಮಿಸಿಕೊಂಡು ಸ್ವತ: ಹಾಲು ಉತ್ಪಾದಕರೇ ಮಾಲೀಕರಾಗಿ ನಿರ್ವಹಿಸುವಂತಹ ಸಂಸ್ಥೆಗಳನ್ನು ಸ್ಥಾಪಿಸುವುದೇ ಹೈನು ಅಭಿವೃದ್ಧಿಯ ಮೂಲತತ್ವವಾಗಿದೆ. ಒಟ್ಟಿನಲ್ಲಿ, ಕರ್ನಾಟಕ ಹಾಲು ಮಹಾಮಂಡಳಿಯ ಪ್ರತಿಯೊಂದು ಚಟುವಟಿಕೆಯೂ ಸಹ “ಹಾಲು ಉತ್ಪಾದಕರಿಗೆ ಗರಿಷ್ಠ ಪ್ರತಿಫಲವನ್ನು ದೊರಕಿಸಲು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಆರ್ಥಿಕ ಏಳ್ಗೆಯನ್ನು ಸಾಧಿಸುವುದು ಮತ್ತು ನಗರ ಪ್ರದೇಶದಲ್ಲಿನ ಗ್ರಾಹಕರಿಗೆ ಸಾಧ್ಯವಾದಷ್ಟು ಕನಿಷ್ಠ ಬೆಲೆಯಲ್ಲಿ ಆರೋಗ್ಯಕರ ಹಾಲನ್ನು ಒದಗಿಸುವುದು” ಎಂಬ ಮೂಲತತ್ವವನ್ನು ಸಾಧಿಸುವ ನಿಟ್ಟಿನಲ್ಲಿಯೇ ಇರುತ್ತದೆ. ಕಹಾಮದ ಮೂಲ ಧ್ಯೇಯೋದ್ದೇಶವು ಗ್ರಾಮೀಣ ಹಾಲು ಉತ್ಪಾದಕರ ಸಮೂಹ ಮತ್ತು ಲಕ್ಷಾಂತರ ನಗರ ಪ್ರದೇಶದ ಗ್ರಾಹಕರ ನಡುವೆ ಸೇತುವೆಯನ್ನು ನಿರ್ಮಿಸುವುದರ ಮೂಲಕ ಕರ್ನಾಟಕ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ಸಾಮಾಜಿಕ ಹಾಗೂ ಆರ್ಥಿಕ ಕ್ರಾಂತಿಯನ್ನು ಸಾಧಿಸುವುದೇ ಆಗಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.
080-260 96800
ಸಹಾಯವಾಣಿ:
1800 425 8030 toll free 10.00AM - 5.30PM
(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)
ನಂದಿನಿ ನೆರವು ದೂರವಾಣಿ ಸಂಖ್ಯೆ (24*7):
080-66660000
ಫಾಕ್ಸ್:: 080-255 36105