1800 425 8030 ಟೋಲ್ ಫ್ರೀ 10.00AM - 5.30PM
ಎರಡನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ

(ಬಮೂಲ್​ – ಬೆಂಗಳೂರು ಡೇರಿ)

ಮೊದಲಿಗೆ ಉದ್ಯಾನ ನಗರಿ ಎಂದು ಕರೆಯಲ್ಪಟ್ಟು ಈಗ ಭಾರತದ ಸಿಲಿಕಾನ್ ರಾಜಧಾನಿ ಎಂದೇ ಪ್ರಖ್ಯಾತವಾಗಿರುವ ಬೆಂಗಳೂರು ನಗರ ಡೇರಿ ಚಟುವಟಿಕೆಯಲ್ಲಿ ಕ್ಷಿಪ್ರವಾಗಿ ಮುನ್ನುಗ್ಗುತ್ತಿದೆ.

ಐದು ದಶಕಗಳ ಹಿಂದೆ ಯೂನಿಸೆಫ್ ನೆರವಿನೊಂದಿಗೆ ಪ್ರಾರಂಭಗೊಂಡು ಪ್ರತಿದಿನ 50,000ಲೀಟರ್ ಹಾಲು ಸಂಸ್ಕರಣೆ ಮಾಡುತ್ತಿದ್ದ ಡೇರಿಯು ಇಂದು ಅತ್ಯಾಧುನಿಕ ಘಟಕವಾಗಿದ್ದು ಪ್ರತಿದಿನ 8.00 ಲಕ್ಷ ಲೀಟರ್ ಹಾಲು ಸಂಸ್ಕರಣೆಯಿಂದ ಈಗ ಇದರ ಸಾಮರ್ಥ್ಯವನ್ನು 10.00 ಲಕ್ಷ ಲೀಟರಿಗೆ ವಿಸ್ತರಿಸಲಾಗಿದೆ.  ಈ ಹಾಲು ಒಕ್ಕೂಟವು 12 ತಾಲ್ಲೂಕುಗಳ ವ್ಯಾಪ್ತಿಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿರುವ 2,202 ಸಹಕಾರ ಸಂಘಗಳನ್ನು ಒಳಗೊಂಡಿದೆ.

ನಗರದ ಹೊರವಲಯದಲ್ಲಿರುವ ಹೊಸಕೋಟೆಯಲ್ಲಿನ 1.5 ಲಕ್ಷ ಲೀಟರ್ ಸಾಮರ್ಥ್ಯದ ಶೀತಲಕೇಂದ್ರವನ್ನು ಪ್ರತಿದಿನ 2.00 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯದ ನೂತನ ಡೇರಿಯಾಗಿ ಪರಿವರ್ತಿಸಲಾಗಿದ್ದು, ಕಾರ್ಯಾಚರಣೆಯಲ್ಲಿದೆ.

ಆನೇಕಲ್ಲಿನಲ್ಲಿ 100ಸಾವಿರ ​ಲೀಟರ್, ಬೈರಾಪಟ್ನದಲ್ಲಿ 100ಸಾವಿರ ಲೀಟರ್, ದೊಡ್ಡಬಳ್ಳಾಪುರದಲ್ಲಿ 160ಸಾವಿರ ಲೀಟರ್, ವಿಜಯಪುರದಲ್ಲಿ 100ಸಾವಿರ ಲೀಟರ್, ಸೋಲೂರಿನಲ್ಲಿ 160ಸಾವಿರ ಲೀಟರ್, ಕನಕಪುರದಲ್ಲಿ 600ಸಾವಿರ ಲೀಟರ್ ಸಾಮರ್ಥ್ಯಗಳ ಶೀತಲಕೇಂದ್ರಗಳನ್ನು ಹೊಂದಿದ್ದು,  ಒಟ್ಟಾರೆ ದಿನಂಪ್ರತಿ 12,20,000 ಲೀಟರ್ ಹಾಲನ್ನು ಶೀತಲೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸಕೋಟೆಯಲ್ಲಿ 200ಸಾವಿರ ಲೀಟರ್ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. 212 ಬಲ್ಕ್ ಮಿಲ್ಕ್ ಕೂಲರ್, 1993 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಮತ್ತು 23 ಸಮುದಾಯ ಹಾಲು ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 17.02 ಲಕ್ಷ ಕೇಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ  8.01 ಲಕ್ಷ ಲೀಟರ್ ಹಾಲು ಮತ್ತು 1.06 ಲಕ್ಷ ಕೇಜಿ ಮೊಸರನ್ನು ಮಾರಾಟ ಮಾಡುತ್ತಿದೆ.  

ಒಕ್ಕೂಟದ ಹಿರಿಮೆ: ಇಡೀ ದಕ್ಷಿಣ ಭಾರತದಲ್ಲಿ ಸಂಪೂರ್ಣವಾಗಿ ಗಣಕೀಕರಣಗೊಂಡಿರುವ ಮಾನವ ಕೈಸ್ಪರ್ಶವಿಲ್ಲದೆ ಹಾಲು ಸಂಸ್ಕರಿಸುವ ಮೆಗಾ ಡೇರಿ.  ಅಲ್ಲದೆ, ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಹಾಲು ಶೇಖರಣೆ, ಮಾರಾಟ ಮತ್ತು ಇಡೀ ದೇಶದಲ್ಲಿ ಅತ್ಯಂತ ಹೆಚ್ಚಿನ ಮೊಸರು ಮಾರಾಟದ ಹೆಗ್ಗಳಿಕೆ.  ಇಷ್ಟೇ ಅಲ್ಲದೆ, ಹಾಲು ಸಾಗಾಣಿಕ ವಿತರಣಾ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿ ನಿರ್ವಹಿಸುತ್ತಿರುವ ಒಕ್ಕೂಟವಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ,
ಡಾ.ಎಂ.ಹೆಚ್.ಮರೀಗೌಡ ರಸ್ತೆ, ಬೆಂಗಳೂರು - 560 029
ಫೋನ್: 080-25536968/ 25536234/ 25521695
ಫ್ಯಾಕ್ಸ್: 080-25536234
ಇ-ಮೈಲ್: [email protected]  
Read More...

 

ವಿಳಾಸ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ .
ಕಹಾಮ ಸಂಕೀರ್ಣ, ಅಂಚೆ ಪೆಟ್ಟಿಗೆ ಸಂಖ್ಯೆ- 2915,
ಡಿ. ಆರ್. ಕಾಲೇಜು ಅಂಚೆ, ಡಾ.ಎಂ.ಹೆಚ್.ಮರಿಗೌಡ ರಸ್ತೆ,
ಬೆಂಗಳೂರು-560029, ಕರ್ನಾಟಕ.

ದೂರವಾಣಿ

080-260 96800

ಸಹಾಯವಾಣಿ:

1800 425 8030 toll free 10.00AM - 5.30PM

(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ನಂದಿನಿ ನೆರವು ದೂರವಾಣಿ ಸಂಖ್ಯೆ (24*7):

080-66660000

ಫಾಕ್ಸ್:: 080-255 36105